‘ರಾಜೀನಾಮೆ ನೀಡಿ, ” ಎಂದು ಬೆದರಿಸಿ ಬಲವಂತವಾಗಿ ಪಡೆಯುವ ರಾಜೀನಾಮೆಗೆ ಕಾನೂನಿನ ಮಾನ್ಯತೆಯಿಲ್ಲ. BNS ಕಾಯ್ದೆಯಡಿ ಕ್ರಿಮಿನಲ್ ಅಪರಾಧವೂ ಆಗಬಹುದು. ಇಂತಹ ಸಂದರ್ಭದಲ್ಲಿ ಉದ್ಯೋಗಿಗಳು ದಿಢೀರ್ ಸಹಿ ಮಾಡದೆ ಕಾಲಾವಕಾಶ ಕೇಳಬೇಕು. ಒತ್ತಡದಿಂದ ಸಹಿ ಹಾಕುವಂತಾದರೂ, ತಕ್ಷಣವೇ ವೈಯಕ್ತಿಕ ಇ-ಮೇಲ್ ಮೂಲಕ ಕಂಪನಿಗೆ ಆಕ್ಷೇಪಣೆ ಸಲ್ಲಿಸಿ ದಾಖಲೆ ಇಟ್ಟುಕೊಳ್ಳಬೇಕು ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಾರೆ.
ಹೈಲೈಟ್ಸ್:
- ಇಂದೇ ರಾಜೀನಾಮೆ ನೀಡಿ, ಇಲ್ಲವೇ ನಿಮ್ಮನ್ನು ಕೆಲಸದಿಂದ ವಜಾಗೊಳಿಸುತ್ತೇವೆ ಎಂದು ಕಂಪನಿ ಬೆದರಿಸಿದರೆ ಆ ರಾಜೀನಾಮೆಗೆ ಕಾನೂನಿನ ಮಾನ್ಯತೆ ಇಲ್ಲ.
- ಇಂತಹ ಸಂದರ್ಭದಲ್ಲಿ ಉದ್ಯೋಗಿಗಳು ಏನು ಮಾಡಬೇಕು ಎಂದು ಸಲಹೆ ನೀಡಿದ ಹೈಕೋರ್ಟ್ ವಕೀಲರಾದ ಅನಂತ್ ಆನಂದ್ ಪೋಖರಿಯಾಲ್.
- ತಕ್ಷಣವೇ ವೈಯಕ್ತಿಕ ಇ-ಮೇಲ್ ಮೂಲಕ ಕಂಪನಿಗೆ ಆಕ್ಷೇಪಣೆ ಸಲ್ಲಿಸಿ ದಾಖಲೆ ಇಟ್ಟುಕೊಳ್ಳಬೇಕು ಎಂದು ಕಾನೂನು ತಜ್ಞರು ಸಲಹೆ.

See More ಲೆಟರ್ನಲ್ಲಿ ಕಪ್ಪು ಚುಕ್ಕೆ ಬೀಳುತ್ತದೆ, ಮುಂದಿನ ಕೆಲಸಕ್ಕೆ ತೊಂದರೆಯಾಗುತ್ತದೆ, ಬ್ಯಾಕ್ಗ್ರೌಂಡ್ ವೆರಿಫಿಕೇಶನ್ ಹಾಳಾಗುತ್ತದೆ ಎಂಬ ಭಯ ಹುಟ್ಟಿಸಲಾಗುತ್ತದೆ. ಕೆರಿಯರ್ ಹಾಳಾಗುವ ಆತಂಕದಿಂದ ಬಹುತೇಕ ಉದ್ಯೋಗಿಗಳು ಕಂಪನಿ ಹೇಳಿದಂತೆ ಬಲವಂತವಾಗಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕುತ್ತಾರೆ. ಆದರೆ, ಹೀಗೆ ಹೆದರಿಸಿ ಪಡೆಯುವ ರಾಜೀನಾಮೆಗೆ ಕಾನೂನಿನಲ್ಲಿ ಯಾವುದೇ ಭ ಕಾನೂನು ತಜ್ಞರು.
ಗುಜರಾತ್ ಹೈಕೋರ್ಟ್ ವಕೀಲರಾದ ಅನಂತ್ ಆನಂದ್ ಪೋಖರಿಯಾಲ್ ಅವರು ಇತ್ತೀಚೆಗೆ ಲಿಂಕ್ಡ್ಇನ್ನಲ್ಲಿ ಈ ಬಗ್ಗೆ ಎಚ್ಚರಿಕೆ ನೀಠ ರಾಜೀನಾಮೆಯು ಕಾನೂನಿನ ಪ್ರಕಾರ ರಾಜೀನಾಮೆಯೇ ಅಲ್ಲ. ಅದೊಂದು ಮುಚ್ಚಿಡಲ್ಪಟ್ಟ ವಜಾಗೊಳಿಸುವಿಕೆ. ಭಾರತೀಯ ಕಾನೂನಿನಡಿ ಇದನ್ನು ಪ್ರಶ್ನಿಸುವ ಹಕ್ಕು ಉದ್ಯೋಗಿಗಳಿಗಿದೆ’ ಎಂದಿದ್ದಾರೆ.
ಎಚ್ಆರ್ ಬೆದರಿಕೆ ಹಾಕಿದಾಗ ಉದ್ಯೋಗಿಗಳು ಏನು ಮಾಡಬೇಕು?
ವಕೀಲ ಪೋಖರಿಯಾಲ್ ಅವರು 2 ಸಲಹೆಗಳನ್ನು ನೀಡಿದ್ದಾರೆ.
1.ತಕ್ಷಣ ಸಹಿ ಮಾಡಬೇಡಿ, ಸಮಯ ಕೇಳಿ
ಒತ್ತಡ ಹೇರಿದ ತಕ್ಷಣ ಯಾವುದೇ ಪತ್ರಕ್ಕೆ ಸಹಿ ಮಾಡದಿರಿ. ” ಕಾನೂನು ಸಲಹೆಗಾರರೊಂದಿಗೆ ಚರ್ಚಿಸಲು ನನಗೆ 24 ರಿಂದ 48 ಗಂಟೆಗಳ ಕಾಲಾವಕಾಶ ” ಕೇಳಿ. See More ಕೇಳುವುದು ಯಾವುದೇ ನಿಯಮ ಉಲ್ಲಂಘನೆಯಲ್ಲ. ಒಂದು ವೇಳೆ ಸಹಿ ಮಾಡುವವರೆಗೆ ಮೀಟಿಂಗ್ ರೂಮ್ನಿಂದ ‘ ಬಂಧನ’ ಎಂಬ ಪ್ರತ್ಯೇಕ ಅಪರಾಧವಾಗುತ್ತದೆ.
2. ಇ-ಮೇಲ್ ಮಾಡಿ ಲಿಖಿತ ದಾಖಲೆ ಇಡಿ
ಒಂದು ವೇಳೆ ತೀವ್ರ ಒತ್ತಡಕ್ಕೆ ಮಣಿದು ನೀವು ಸಹಿ ಹಾಕಲೇಬೇಕಾದ ಪರಿಸ್ಥಿತಿ ಬಂದರೆ, ಮೀಟಿಂಗ್ ಮುಗಿದ (ಆಫೀಸ್) ಐಡಿಯಿಂದ ಅಲ್ಲ) ಎಚ್ಆರ್ ಮತ್ತು ಮ್ಯಾನೇಜ್ಮೆಂಟ್ಗೆ ಒಂದು ಮೇಲ್ ಮಾಡಿ. ” ಹಾಳುಮಾಡುವ ಬೆದರಿಕೆ ಹಾಕಿ, ತೀವ್ರ ಒತ್ತಡ ಹೇರಿ ನನ್ನಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ. ನಾನು ತೀವ್ರ ವಿರೋಧದ ನಡಾಮೆ “” ಎಂದು ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿ. ಕಾನೂನು ಹೋರಾಟ ನಡೆಸಲು ಈ ಇ-ಮೇಲ್ ಪ್ರಬಲ ಸಾಕ್ಷಿಯಾಗಿ ಕೆಲಸ ಮಾಡುತ್ತದೆ.
What do you think?
ಭಾರತೀಯ ಕರಾರು ಕಾಯ್ದೆ, 1872ರ ಪ್ರಕಾರ, ಯಾವುದೇ ಒಪ್ಪಂದವು ಮುಕ್ತ ಸಮ್ಮತಿಯಿಂದ ಕೂಡಿರಬೇಕು. ಒತ್ತಡ, ಭಯ ಅಥವಾ ಬೆದರಿಕೆಯಿಂದ ಪಡೆದ ಸಹಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಕೇವಲ ಹತ್ತು ನಿಮಿಷದ ಮೀಟಿಂಗ್ನಲ್ಲಿ, ಯೋಚಿಸಲೂ ಸಮಯ ಕೊಡದೆ ಉದ್ಯೋಗಿಯ ಸಿಸ್ಟಂ ಲಾಗಿನ್ ” ನ್ಯಾಯಾಲಯದಲ್ಲಿ ಪ್ರಶ್ನಿಸಿ ರದ್ದುಗೊಳಿಸಬಹುದು.
ಕಂಪನಿಗಳು ಸ್ವಯಂಪ್ರೇರಿತ ರಾಜೀನಾಮೆಗೆ ಏಕೆ What?
ಇದರ ಹಿಂದಿನ ಅಸಲಿ ಕಾರಣ ಹಣ ಮತ್ತು ಕಾನೂನು ಪ್ರಕ್ರಿಯೆ. ಉದ್ಯೋಗಿಯನ್ನು ಅಧಿಕೃತವಾಗಿ ವಜಾಗೊಳಿಸಿದರೆ, ಕಂಪನಿಯು ಕಾಯ್ದೆ ಹಾಗೂ ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ವಜಾಗೊಳಿಸಲು ಸೂಕ್ತ ಕಾರಣ ನೀಡಬೇಕು, ನೋಟಿಸ್ ಪಿರಿಯಡ್ ನಿಯಮ ಪಾಲಿಸಬೇಕು ಹಾಗೂ ಪರಿಹಾರವನ್ನು ನೀಡಬೇಕಾಗುತ್ತದೆ. ಆದರೆ, ಉದ್ಯೋಗಿಯೇ ರಾಜೀನಾಮೆ ನೀಡಿದರೆ ಕಂಪನಿಖ ಯಾವುದೇ ಹೊಣೆಗಾರಿಕೆ ಇರುವುದಿಲ್ಲ. ಪರಿಹಾರದ ಹಣವನ್ನು ಉಳಿಸಲು ಹಾಗೂ ಕಾನೂನು ಪ್ರಕ್ರಿಯೆಗಳಿಂದ ಸುಲಭವಾಗಿ ನುಣುಚಿಕೊಳ್ಳಲು ಕಂಪನಿಗಳು ಉದ್ಯೋಗಿಗಳಿಗೆ ಮಾನಸಿಕ ಹಿಂಸೆ ನೀಡಿ ರಾಜೀನಾಮೆ ಪಡೆಯುತ್ತವೆ.
ಇದು ಕ್ರಿಮಿನಲ್ ಅಪರಾಧವೂ ಹೌದು!
ಉದ್ಯೋಗಿಗಳಿಗೆ ಬೆದರಿಕೆ ಹಾಕುವುದು ಕೇವಲ ಕಾರ್ಮಿಕ ಕಾನೂನಿನ ಉಲ್ಲಂಘನೆ ಮಾತ್ರವಲ್ಲ, ಇದು ಹೊಸ Number 2023 ಅಡಿಯಲ್ಲಿ ಕ್ರಿಮಿನಲ್ ಭ ಆಗುತ್ತದೆ.
ಭವಿಷ್ಯದ ಕೆರಿಯರ್ ಹಾಳುಮಾಡುತ್ತೇವೆ, ಬಿಜಿವಿ ರಿಪೋರ್ಟ್ ಕೆಡಿಸುತ್ತೇವೆ ಎಂದು ಹೆದರಿಸುವುದು, ಗಳಿಸಿದ ಹಣವನ್ನು ತಡೆಹಿಡಿಯುವುದು ಕಾನೂನಿನ ಪ್ರಕಾರ ಅಪರಾಧ. ಈ ಕಾನೂನಿನಡಿ, ಬೆದರಿಕೆ ಹಾಕಿದ ಮ್ಯಾನೇಜರ್ ಅಥವಾ ಎಚ್ಆರ್ ಅಧಿಕಾರಿಗಳಿಗೆ 2 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಕೂಡ ಆಗಬಹುದು. ಅಂದರೆ, ಕಂಪನಿ ಮಾತ್ರವಲ್ಲದೆ ಬೆದರಿಕೆ ಹಾಕುವ ಅಧಿಕಾರಿಗಳು ವೈಯಕ್ತಿಕವಾಗಿಯೂ ಜೈಲುಪಾಲು ಆಗುವ ಸಾಧ್ಯತೆ ಇರುತ್ತದೆ.