Last update:
ಮೈಸೂಾಖೆಯ ಮಾವು ಹಲಸು ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ, ತುಮಕೂರು ಜಹಾಂಗೀರ್ ಮಾವು, ಹೆಜ್ಜೇನು ಹಲಸು ಆಕರ್ಷಣೆ, ರೈತರಿಗೆ ನೇರ ಲಾಭ.
+
ಇಲ್ಲಿ ವಿಡಿಯೋ ನೋಡಿ
ಮೈಸೂರು: ಬೇಸಿಗೆಯ ಹಣ್ಣಿನ ಸೀಸನ್ ಅನ್ನು ಮೈಸೂರಿನ (Mysuru) ಹಬ್ಬದಂತೆ ಆಚರಿಸಿದ್ದಾರೆ. ತೋಟಗಾರಿಕೆ ಇಲಾಖೆಯ (Horticulture Department) ವತಿಯಿಂದ ಆಯೋಜಿಸಲಾಗಿದ್ದ ಈ ಮಾವು(Mango) ಹಾಗೂ ಹಲಸು (Jackfruit) ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಸೂರು, ತುಮಕೂರು, ಚಾಮರಾಜನಗರ (Chamarajanagara), ಹಾಸನ ಸೇರಿದಂತೆ See More ಹಣ್ಣುಗಳು ಗ್ರಾಹಕರನ್ನು ಮಂತ್ರಮುಗ್ಧರನ್ನಾಗಿಸಿವೆ.
ಏನಿದು ವಿಶೇಷ ಆಕರ್ಷಣೆ?
ಈ ಬಾರಿಯ ಮೇಳದ ಮುಖ್ಯ ಆಕರ್ಷಣೆಯಾಗಿ ತುಮಕೂರು ಜಿಲ್ಲೆಯ ಕೊರಟೆಗೆರೆಯ ರೈತ ಅರುಣ್ ಕುಮಾರ್ ಬೆಳೆದಿರುವ ಜಹಾಂಗೀರ್ ಮಾವು ನಿಂತಿತ್ತು. ನೀವು ಕೇಳಿರುವುದು ನಿಜ. ಈ ಮಾವಿನ ಗಾತ್ರ ಎಷ್ಟು ದೊಡ್ಡದಿದೆಯೆಂದರೆ, ಒಂದು ಕೆಜಿಗೆ ಕೇವಲ ಎರಡು ಹಣ್ಣುಗಳು ಮಾತ್ರ ಬರುತ್ತವೆ. ರುಚಿ ಮತ್ತು ಸುವಾಸನೆಯಲ್ಲಿ ಸೈ ಎನಿಸಿಕೊಂಡಿರುವ ಈ ವಿಶೇಷ ತಳಿಯ ಮಾವು ಕೆಜಿಗೆ 120 ರೂಪಾಯಿಗೆ ಮಾರಾಟವಾಗಿದೆ.
ಹೆಜ್ಜೇನು ಹಲಸು
ಜೊತೆಗೆ, ಹಣ್ಣು ಪ್ರಿಯರ ನಾಲಿಗೆ ಚಪ್ಪರಿಸಲು ‘ಹೆಜ್ಜೇನು ಹಲಸು’ ಕೂಡ ಸಜ್ಜಾಗಿದೆ. ಸುಮಾರು 20 ಕೆಜಿ ತೂಕದ ಬೃಹತ್ ಹೇವಲ 500 ರೂಪಾಯಿಗೆ ಲಭ್ಯವಿತ್ತು. ಅಷ್ಟೇ ಅಲ್ಲ, ಕೈಗೆ ಅಂಟಿಕೊಳ್ಳದ ಗಮ್ ಲೆಸ್ ಹಲಸು ಪ್ರದರ್ಶನವೂ ಪ್ರವಾಸಿಗರ ಗಮನ ಸೆಳೆದಿದೆ.
ರೈತರಿಗೆ ಮತ್ತು ಗ್ರಾಹಕರಿಗೆ ಲಾಭದಾಯಕ ಸೇತುವೆ
ಈ ಮೇಳ ಕೇವಲ ಮಾರಾಟಕ್ಕಷ್ಟೇ ಸೀಮಿತವಾಗಿಲ್ಲ. ” ಬೆಳೆಯುವ ವಿಧಾನ ಮತ್ತು ಆರೋಗ್ಯದ ಲಾಭಗಳ ಬಗ್ಗೆ ಗ್ರಾಹಕರಿಗೆ ನೇರವಾಗಿ ಮಾಹಿತಿ ನೀಡಿದ್ದಾರೆ. ಮಧ್ಯವರ್ತಿಗಳಿಲ್ಲದೆ ನೇರವಾಗಿ ರೈತರಿಂದ ತಾಜಾ ಃ ಮೇಳದ ಮತ್ತೊಂದು ಹೆಗ್ಗಳಿಕೆ.
Location :
Mysore,Mysore,Karnataka
