Last update:
ನನಗೆ ಕೆಪಿಸಿಸಿ ಸ್ಥಾನ ಕೈ ತಪ್ಪಿದ್ದಲ್ಲ, ಹೈಕಮಾಂಡ್ ನಾಯಕರು ಒನ್ ಮ್ಯಾನ್ ಒನ್ ಪೋಸ್ಟ್ ಅಷ್ಟೇ ಅನ್ನೋ ಮಾತನ್ನ ಎರಡು ತಿಂಗಳಿಂದ ಹೇಳ್ತಿದ್ದರು ಎಂದ ಸಾಹುಕಾರ್…
ಬೆಂಗಳೂರು (ಜೂ.04): ಅಂತೂ-ಇಂತೂ ಕಾಂಗ್ರೆಸ್ (Congress) ನಾಯಕತ್ವ ಬದಲಾಯ್ತು. ಡಿಕೆ ಶಿವಕುಮಾರ್ ಅವರ ಸಿಎಂ ಆಸೆ ಕೂಡ ಈಡೇರಿತು. (President of KPCC) (satish Jarakiholi) ಕನಸು ನನಸಾಗಲಿಲ್ಲ. ಕಾರಣ ಏನು? What do you think? ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ ಸತೀಶ್ ಜಾರಕಿಹೊಳಿ.
ಸಿಎಂಡಿಕೆ ಶಿವಕುಮಾರ್ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಯಾಗ್ತಿದ್ದು, ಇತ್ತ ಬೆಂಗಳೂರಲ್ಲಿ ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಇದೇ ವೇಳೆ ಮಾತಾಡಿದ ಜಾರಕಿಹೊಳಿ, ಈಗಾಗಲೇ ಮೂರು ವರ್ಷ ಲೋಕೋಪಯೋಗಿ ಖಾತೆಯಲ್ಲಿ ಕೆಲಸ ಮಾಡಿದ್ದೇನೆ. ಈಗ ಖಾತೆ ಹಂಚಿಕೆ ಬಗ್ಗೆ ಸಿಎಂ ಏನು ಮಾಡ್ತಾರೆ ನೋಡೋಣ ಎಂದ್ರು. ಅಲ್ಲದೇ ನನಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದು ಅಲ್ಲ ಎಂದಿದ್ದಾರೆ.
ನನಗೆ ಕೆಪಿಸಿಸಿ ಸ್ಥಾನ ಕೈ ತಪ್ಪಿದ್ದಲ್ಲ, ಹೈಕಮಾಂಡ್ ನಾಯಕರು ಒನ್ ಮ್ಯಾನ್ ಒನ್ ಪೋಸ್ಟ್ ಅಷ್ಟೇ ಅನ್ನೋ ಮಾತನ್ನ ಎರಡು ತಿಂಗಳಿಂದ ಹೇಳ್ತಿದ್ದಾರೆ. ಡಿಕೆಶಿ ಅವರು ಬಂದಾಗ ಕಾರಣಗಳು ಇದ್ವು. ಮಂತ್ರಿ ಆಗಿಲ್ಲ ಅಂದ್ರೆ ಕೆಪಿಸಿಸಿ ಅಧ್ಯಕ್ಷ ಆಗ್ತಿದ್ದೆ. ನನಗೆ ಮಂತ್ರಿ ಸ್ಥಾನವೂ ಬೇಕಿತ್ತು ಎಂದು ಜಾರಕಿಹೊಳಿ ಅವರು ಸ್ಪಷ್ಟನೆ ನೀಡೋ ಪ್ರಯತ್ನ ಮಾಡಿದ್ದಾರೆ.
The ತೋರಿಸಲು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳಿಲ್ಲ. ಸಿದ್ದರಾಮಯ್ಯ ಸಿಎಂ ಆಗೋಕೆ ಈ ಹಿಂದೆ What? ಸಿಎಂ ಆಗೋಕೆ ಅಧ್ಯಕ್ಷರೇ ಆಗಬೇಕು ಅಂತೇನಿಲ್ಲ. ನನಗೆ ಅಧ್ಯಕ್ಷ ಸ್ಥಾನದ ಜೊತೆಗೆ ಸಚಿವ ಸ್ಥಾನ ಎರಡೂ ಬೇಕು ಅಂತ ಹೇಳಿದ್ದೆ ಎಂದ ಜಾರಕಿಹೊಳಿ ನಾನು ಮನಸ್ಸು ಮಾಡಿದ್ರೆ ಕೆಪಿಸಿಸಿ ಅಧ್ಯಕ್ಷನಾಗ್ತಿದ್ದೆ ಎನ್ನುವಂತೆ ಮಾತಾಡಿದ್ದಾರೆ.
ಕೆಪಿಸಿಸಿ ಸ್ಥಾನ ಕೈ 2028ಕ್ಕೆ ಸತೀಶ್ ಜಾರಕಿಹೊಳಿ ಸಿಎಂ ಆಗ್ತಾರಾ ಎನ್ನುವ ಪ್ರಶ್ನೆ ಉತ್ತರಿಸಿ ಸತೀಶ್ ಜಾರಕಿಹೊಳಿ ಅವ್ರು, ನೋಡೋಣ ಇನ್ನೂ ಎರಡು ವರ್ಷಗಳು ಇದೆ. ಬಿಕೆ ಸಿಎಂ ಯಾಕ್ ಆಗಬಾರದು? ಎಂದು ಪ್ರಶ್ನೆ ಮಾಡಿದ್ದಾರೆ.
ನಮ್ಮ ಜಿಲ್ಲೆಗೆ ಒಂದು ಸ್ಥಾನ ಸಿಕ್ಕಿದೆ, ಇನ್ನೊಂದು ಮಂತ್ರಿ ಸ್ಥಾನ ಸಿಗುತ್ತದೆ. ಕಾಂಗ್ರೆಸ್ ನಮ್ಮನ್ನು ಹೇಗೆ ಬಳಸಿಕೊಳ್ಳುತ್ತೋ ಗೊತ್ತಿಲ್ಲ. ನಾವಂತೂ ಕಾಂಗ್ರೆಸ್ನಲ್ಲಿ ನಮ್ಮ ಕೆಲಸವನ್ನು ಬಳಸಿಕೊಳ್ಳುತ್ತೇವೆ. ಹೈಕಮಾಂಡ್ ನಾಯಕರು ಒಂದೇ ಡಿಸಿಎಂ ಮಾಡಿದ್ರು. ನಮಗೂ ಒಂದು, ಹಾಗೇ ಮತ್ತೆರಡು ಸಮಾಜಕ್ಕೆ ಕೊಡಬಹುದು ಎಂಬ ನಿರೀಕ್ಷೆಯಿತ್ತು. ಇವಾಗ ನಮಗೆ ಕೊಡಿ ಅಂತ ನಾನು ಏನು ಕೇಳೋದಿಲ್ಲ ಎಂದ್ರು ಜಾರಕಿಹೊಳಿ.
ಇದೇ ವೇಳೆ ಜಮೀರ್ ಆಡಿಯೋ ವೈರಲ್ ಬಗ್ಗೆಯೂ ಮಾತಾಡಿದ ಸತೀಶ್ ಜಾರಕಿಹೊಳಿ ಅವರು, ಜಮೀರ್ ಅಹಮದ್ ಅವರ ಶಕ್ತಿ ನಮಗೆ ಅವಶ್ಯಕತೆ ಇದೆ. ಜಮೀರ್ ಆಡಿಯೋ ವೈರಲ್ ಹಿಂದೆ ಕೈವಾಡ ಇದ್ದೆ ಇದೆ ಎಂದಿದ್ದಾರೆ.
(ವರದಿ: ಕೃಷ್ಣ, ನ್ಯೂಸ್18 ಕನ್ನಡ, ಬೆಂಗಳೂರು)
Satish Jarkiholi: ? ಜಾರಕಿಹೊಳಿ ಸ್ಪೋಟಕ ಹೇಳಿಕೆ
