Last update:
Vinay Kulkarni: ಜಿಮ್ನಲ್ಲಿದ್ದ ಯೋಗೀಶ್ ಗೌಡ ಮೇಲೆ ಮೃತ್ಯು What’s wrong with you? ಹಾಡಹಗಲೇ ಧಾರವಾಡದ ಬೀದಿಯಲ್ಲಿ ನಡೆದ ಆ ಭೀಕರ ರಕ್ತಪಾತದ ಅಸಲಿ ಕಥೆ ಈಗ ಇಲ್ಲಿದೆ.
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ (Yogesh Gowda) ಅವರನ್ನು ಜೂನ್ 15, 2016ರಂದು ಅವರದ್ದೇ ಮಾಲೀಕತ್ವದ ಜಿಮ್ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆಯು ಆ ಸಮಯದಲ್ಲಿ ಇಡೀ ರಾಜ್ಯವನ್ನೇ ನಡುಗಿಸಿತ್ತು. ಆರಂಭದಲ್ಲಿ ಇದೊಂದು ಭೂಮಿ ವಿವಾದ ಅಥವಾ ವೈಯಕ್ತಿಕ ದ್ವೇಷದ ಕೊಲೆ ಎಂದು ಭಾವಿಸಲಾಗಿತ್ತು. (CBI) ದೊಡ್ಡ ರಾಜಕೀಯ ಪಿತೂರಿ (Political conspiracy) ಇರುವುದು ಬಯಲಿಗೆ ಬಂತು.
December 15, 2016 ಧಾರವಾಡದ ಸಪ್ತಾಪುರದಲ್ಲಿರುವ ತಮ್ಮ ಉದಯ್ ಜಿಮ್ಗೆ ಬಂದಿದ್ದರು. ಅಲ್ಲೇ ಇದ್ದ ಪೇಪರ್ ಕೈಗೆತ್ತಿಕೊಂಡು ಓದುತ್ತಾ ಕುಳಿತಿದ್ದರು. ಆಗ ಅವರಿಗೆ ಇಂದೇ ತನ್ನ ಕೊನೆಯ ದಿನ ಅನ್ನೋ ಅರಿವು ಇರಲಿಲ್ಲ. ಆ ಸಮಯದಲ್ಲಿ ಬೈಕ್ನಲ್ಲಿ ಬಂದ ಐವರು ದುಷ್ಕರ್ಮಿಗಳು ಮಿಂಚಿನ ವೇಗದಲ್ಲಿ ಜಿಮ್ ಒಳಗೆ ನುಗ್ಗಿದರು. ಜಿಮ್ನಲ್ಲಿದ್ದವರು ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಈ ತಂಡವು ದಾಳಿ ಆರಂಭಿಸಿತ್ತು.
ದಾಳಿಕೋರರು ಅತ್ಯಂತ ಕ್ರೂರವಾಗಿ ಪ್ಲಾನ್ ಮಾಡಿಕೊಂಡೇ ಬಂದಿದ್ದರು. ಯೋಗೀಶ್ ಗೌಡ ಅವರು ಪ್ರತಿರೋಧ ತೋರದಂತೆ ಮಾಡಲು ಹಂತಕರು ಮೊದಲು ಅವರ ಮುಖಕ್ಕೆ ಖಾರದ ಪುಡಿ ಎರಚಿದರು. ಕಣ್ಣು ಕಾಣದಂತೆ ಮಾಡಿ, ತಕ್ಷಣವೇ ಲಾಂಗ್ ಮತ್ತು ಮಚ್ಚುಗಳಿಂದ ಅವರ ಮೇಲೆ ಮುಗಿಬಿದ್ದರು. ಯೋಗೀಶ್ ಗೌಡ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಹಂತಕರು ಬಿಡಲಿಲ್ಲ.
ಜಿಮ್ನ ಒಳಗೇ ಹಂತಕರು ಯೋಗೀಶ್ ಗೌಡ ಅವರನ್ನು ಅಟ್ಟಾಡಿಸಿ ಕತ್ತರಿಸಿದರು. ಕುತ್ತಿಗೆ ಮತ್ತು ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಯೋಗೀಶ್ ಗೌಡ ಅವರು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟರು. ಹತ್ಯೆ ಮಾಡಿದ ನಂತರ ಹಂತಕರು ಸಲೀಸಾಗಿ ಬೈಕ್ ಏರಿ ಅಲ್ಲಿಂದ ಪರಾರಿಯಾದರು. ಈ ಘಟನೆಯಿಂದ ಇಡೀ ಧಾರವಾಡ ನಗರ ಬೆಚ್ಚಿಬಿದ್ದಿತ್ತು.
ಕೊಲೆ ನಡೆದ ತಕ್ಷಣ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿ ಆರು ಮಂದಿಯನ್ನು ಬಂಧಿಸಿದ್ದರು. ಇದು ವೈಯಕ್ತಿಕ ದ್ವೇಷಕ್ಕೆ ನಡೆದ ಕೊಲೆ ಎಂದು ಮೊದಲು ಹೇಳಲಾಗಿತ್ತು. ಆದರೆ ಯೋಗೀಶ್ ಗೌಡ ಅವರ ಕುಟುಂಬದವರು ಇದನ್ನು ಒಪ್ಪಲಿಲ್ಲ. ಆಗಿನ ರಾಜ್ಯ ಸರ್ಕಾರದ ಸಚಿವರಾಗಿದ್ದ ವಿನಯ್ ಕುಲಕರ್ಣಿ ಅವರ ಮೇಲೆ ಕುಟುಂಬದವರು ನೇರ ಆರೋಪ ಮಾಡಿದ್ದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಯಿತು. ಸಿಬಿಐ ತನಿಖೆ ಶುರು ಮಾಡಿದ ಮೇಲೆ ಅಸಲಿ ಸತ್ಯಗಳು ಹೊರಬರತೊಡಗಿದವು. ಬಂಧಿತರಾಗಿದ್ದವರು ನಕಲಿ ಆರೋಪಿಗಳು ಮತ್ತು ಹಣದ ಆಸೆಗಾಗಿ ಕೊಲೆಯನ್ನು ಮೈಮೇಲೆ ಎಳೆದುಕೊಂಡವರು ಎಂಬುದು ಗೊತ್ತಾಯಿತು. ಕೊಲೆಗೆ ಬಳಸಿದ ಆಯುಧಗಳು ಮತ್ತು ಮೊಬೈಲ್ ಕರೆಗಳ ದಾಖಲೆಗಳು ದೊಡ್ಡ ಕಥೆಯನ್ನೇ ಹೇಳಿದವು.
See More ಹಿಂದೆ ರಾಜಕೀಯ ದ್ವೇಷ ಇರುವುದು ಪಕ್ಕಾ ಆಯಿತು. ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತು ಯೋಗೀಶ್ ಗೌಡ ನಡುವೆ ರಾಜಕೀಯವಾಗಿ ಹಾವು-ಏಣಿ ಆಟ ನಡೆಯುತ್ತಿತ್ತು. ಅಂತಿಮವಾಗಿ ವಿನಯ್ ಕುಲಕರ್ಣಿ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿ ಎಂದು ಹೆಸರಿಸಿದ ಸಿಬಿಐ, ಅವರನ್ನು ಬಂಧಿಸಿ ಜೈಲಿಗೂ ಕಳುಹಿಸಿತು.
ರಾಜಕೀಯ ಪ್ರಾಬಲ್ಯ ಮತ್ತು ಭೂ ವ್ಯವಹಾರಗಳ ವಿಷಯದಲ್ಲಿ ಯೋಗೀಶ್ ಗೌಡ ಅವರು ಪ್ರಬಲ ಎದುರಾಳಿಯಾಗಿ ಬೆಳೆಯುತ್ತಿದ್ದರು. ಇದು ಸ್ಥಳೀಯ ರಾಜಕೀಯ ನಾಯಕರಿಗೆ ನುಂಗಲಾರದ ತುತ್ತಾಗಿತ್ತು. ಇದೇ ಕಾರಣಕ್ಕೆ ಸುಪಾರಿ ನೀಡಿ ಅವರ ಕಥೆ ಮುಗಿಸಲಾಯಿತು ಎಂಬುದು ಸಿಬಿಐ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿರುವ ಪ್ರಮುಖ ಅಂಶ.
17 ಮಂದಿಯನ್ನು ದೋಷಿಗಳೆಂದು ಪರಿಗಣಿಸಿ, ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಒಂದು ಸಣ್ಣ ಜಿಮ್ನಲ್ಲಿ ಆರಂಭವಾದ ಈ ರಕ್ತಚರಿತ್ರೆ, ಇಂದು ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರನ್ನು ಜೈಲಿನ ಬಾಗಿಲಿಗೆ ತಂದು ನಿಲ್ಲಿಸಿದೆ.
Dharwad, Karnataka
Vinay Kulkarni: What? ಈ ಕಾರಣವೇನು? ವಿನಯ್ ಕುಲಕರ್ಣಿ ಹೆಸರು ಬಂದಿದ್ದೇಗೆ?
