Last update:
ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕಾಗಿ, ಹಾಸನ ಸೇರಿ ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆ, ಏಪ್ರಿಲ್ 29 min 1 min 1 min 25 min 25 min ಎಲ್ಲೋ ಅಲರ್ಟ್ ಜಾರಿ
ಬೇಸಿಗೆಯ ತಾಪ ತಾರಕಕ್ಕೇರಿದ್ದ ಸಂದರ್ಭದಲ್ಲೇ ಕರ್ನಾಟಕಕ್ಕೆ ಪೂರ್ವ ಮುಂಗಾರು ಚುರುಕಾಗಿ ಅಪ್ಪಳಿಸಲು ಸಜ್ಜಾಗಿದ್ದು, ಹವಾಮಾನ ಇಲಾಖೆ ಇಂದಿನಿಂದ ಮುಂದಿನ ಐದು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆ ಅಲರ್ಟ್ ಘೋಷಿಸಿದೆ. ಕಳೆದ 32 minutes ಮಿ.ಮೀ. ಮಳೆ ದಾಖಲಾಗಿದ್ದು, ರಾಜ್ಯದ ಮೂಲೆ ಮೂಲೆಯಲ್ಲೂ ವರುಣ ಸುರಿದಿರುವುದು ಇನ್ನಷ್ಟು ಆತಂಕ ಮೂಡಿಸಿದೆ.
ಕರಾವಳಿ ಭಾಗದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಲಿನ ನಡುವೆಯೇ ಅಧಿಕ ತೇವಾಂಶ ಹಾಗೂ ಮೋಡದ ವಾತಾವರಣ ಕಂಡುಬರಲಿದ್ದು, ಸಂಜೆ ಹೊತ್ತಿಗೆ ಉತ್ತರ ಕನ್ನಡ-ಬೆಳಗಾವಿ-ಧಾರವಾಡ ಗಡಿ ಪ್ರದೇಶಗಳಲ್ಲಿ ಹಾಗೂ ಉಡುಪಿ ಮತ್ತು ದಕ್ಷಿಣ ಕನ್ನಡ ಭ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ.
. ಇದರ ಜೊತೆಗೆ ಗಾಳಿಯ ಒತ್ತಡ ಮತ್ತು ಅಧಿಕ ತಾಪಮಾನದ ಕಾರಣ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ See More ನಿರೀಕ್ಷೆ ಇದ್ದು, ಏಪ್ರಿಲ್ 29ರಿಂದ ಈ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಮುನ್ಸೂಚಿಸಲಾಗಿದೆ.
ಮಲೆನಾಡಿನಲ್ಲಿ ಕೊಡಗು ಜಿಲ್ಲೆಯ ಕೆಲವೆಡೆ ಸಂಜೆ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದ್ದು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕರಾವಳಿ ಗಡಿ ಪ್ರದೇಶಗಳಲ್ಲೂ ಸಂಜೆ ಗುಡುಗು ಮಳೆ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲೂ ಚದುರಿದ ಮಳೆ ಬೀಳುವ ಲಕ್ಷಣವಿದ್ದು, 29 min ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಇನ್ನಷ್ಟು ಹೆಚ್ಚಲಿದೆ.
ಉತ್ತರ ಒಳನಾಡಿನ ಭ ಬಳ್ಳಾರಿ ಜಿಲ್ಲೆಗಳಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಗುಡುಗು ಸಹಿತ ಮಳೆ ನಿರೀಕ್ಷಿಸಲಾಗಿದ್ದು, ಉಳಿದ ಜಿಲ್ಲೆಗಳಲ್ಲೂ ಗಾಳಿಯ ಒತ್ತಡ ಹೆಚ್ಚಿದ್ದಲ್ಲಿ ಮಳೆ ಸಾಧ್ಯತೆ ಇರಲಿದೆ. ದಕ್ಷಿಣ ಒಳನಾಡಿನ ಸ ಬಿಸಿಲು ಮತ್ತು ಅಧಿಕ ತಾಪಮಾನ ಮುಂದುವರಿಯಲಿದ್ದರೂ, ಏಪ್ರಿಲ್ 29ರಿಂದ ಅಲ್ಲಿಯೂ ಗುಡುಗು ಸಹಿತ ಮಳೆ ಆರಂಭವಾಗುವ ಮುನ್ಸೂಚನೆ ಇದೆ
ಏಪ್ರಿಲ್ 29 min 25 min 25 min ಇದ್ದು, ಬೀದರ್, ಕಲಬುರ್ಗಿ, ವಿಜಯಪುರ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಉಳಿದಬೆಂಗಳೂರು ಸೇರಿ 25 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಮುಂದುವರಿಯಲಿದೆ. ಏಪ್ರಿಲ್ 30 min 24 min 24 min ಇದ್ದು, ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ
. ಮೇ 1ರಂದು 19 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಜಾರಿಯಾಗಲಿದ್ದು, ರಾಯಚೂರು, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ.
ಕಳೆದ 32 min ಹಾಸನ — 61.5 ಮಿ.ಮೀ. , ರಾಯಚೂರು 34 ಮಿ.ಮೀ., ಕೊಪ್ಪಳ 33.5 ಮಿ.ಮೀ., ಹಾವೇರಿ 26 ಮಿ.ಮೀ., ಬಳ್ಳಾರಿ 22 min., ತುಮಕೂರು 21 ಮಿ.ಮೀ., ವಿಜಯಪುರ 18 ಮಿ.ಮೀ., ಚಿತ್ರದುರ್ಗ 15 ಮಿ.ಮೀ. ಹಾಗೂ ಕಲಬುರ್ಗಿ 14.5 ಮಿ.ಮೀ. ಮಳೆ ದಾಖಲಿಸಿದ್ದು, ರಾಜ್ಯದ ಉದ್ದಗಲಕ್ಕೂ ಪೂರ್ವ ಮುಂಗಾರು ತನ್ನ ಛಾಪು ಮೂಡಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮೆಜೆಸ್ಟಿಕ್, ಕಾರ್ಪೊರೇಷನ್ ಸೇರಿ ಹಲವೆಡೆ ತುಂತುರು ಮಳೆ ಸುರಿದಿದ್ದು, ನಾಳೆಯಿಂದ ನಾಲ್ಕು ದಿನ ಬೆಂಗಳೂರಿಗೆ ಎಲ್ಲೋ ಅಲರ್ಟ್ ಜಾರಿಯಲ್ಲಿರಲಿದ್ದು ನಗರವಾಸಿಗಳು ಎಚ್ಚರದಿಂದಿರಬೇಕಿದೆ.
ದಿನದಿಂದ ದಿನಕ್ಕೆ ಚುರುಕಾಗುತ್ತಿರುವ ಪೂರ್ವ ಮುಂಗಾರು ಬಿರುಬೇಸಿಗೆಗೆ ತಣ್ಣೀರೆರಚಿದಂತಾಗಿದ್ದು, ರಾಜ್ಯದ ಜನರು ಒಂದೆಡೆ ನಿರಾಳತೆ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಗುಡುಗು-ಮಿಂಚಿನ ಆತಂಕ ಎದುರಿಸುತ್ತಿದ್ದಾರೆ. ಕೃಷಿಕರಿಗೆ ಈ ಮಳೆ ವರದಾನವಾದರೂ, ತೋಟ-ಗದ್ದೆಗಳಲ್ಲಿ ಕೆಲಸ ನಿರ್ವಹಿಸುವವರು ಗುಡುಗು-ಸಿಡಿಲಿನ ಸಮಯದಲ್ಲಿ ಮುಕ್ತ ಜಾಗದಲ್ಲಿ ನಿಲ್ಲದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಳೆಯ ಅಬ್ಬರದ ನಡುವೆ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂಥ ಪ್ರದೇಶಗಳಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳು ವಿಶೇಷ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಒಟ್ಟಾರೆ ಮೇ ತಿಂಗಳ ಆರಂಭದ ವೇಳೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳುವ ಸೂಚನೆ ಇದ್ದು, ಪೂರ್ಣ ಪ್ರಮಾಣದ ಮುಂಗಾರಿಗೆ ಕರ್ನಾಟಕ ಸಜ್ಜಾಗಲು ಇನ್ನು ಹೆಚ್ಚು ಸಮಯ ಬೇಕಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.
Location :
Bengaluru, Karnataka

